Menu
Log in


Log in
  • Home
  • Recent Updates

Recent Updates

<< First  < Prev   1   2   3   4   5   Next >  Last >> 
  • 3 Dec 2022 1:07 PM | Seva Bharathi (Administrator)

    ಸೇವಾಭಾರತಿ ಕನ್ಯಾಡಿ. (ರಿ) ಸಂಸ್ಥೆಗೆ ರಾಜ್ಯ ಪ್ರಶಸ್ತಿ ಮಾನ್ಯರೇ, ಈ ವರ್ಷದ ವಿಶ್ವ ವಿಶೇಷಚೇತನರ ದಿನಾಚರಣೆ 2022ರ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರದ ದಿವ್ಯಾಂಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ, ದಿವ್ಯಾಂಗ ಕ್ಷೇತ್ರದಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿರುವ ಸಂಸ್ಥೆಗೆ ಕೊಡಲ್ಪಡುವ ರಾಜ್ಯ ಸೇವಾ ಪ್ರಶಸ್ತಿಗೆ ನಮ್ಮ ಸೇವಾಭಾರತಿ ಕನ್ಯಾಡಿ. (ರಿ) ಆಯ್ಕೆಯಾಗಿರುವುದಾಗಿ ತಿಳಿಸಲು ಹರ್ಷಿಸುತ್ತಿದ್ದೇವೆ.

    ಸೇವಾಭಾರತಿ ವಿಕಲಚೇತನ ಕ್ಷೇತ್ರದಲ್ಲಿ ಮಾಡಿದ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ (03/12/2022) ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿಶ್ವ ವಿಶೇಷಚೇತನ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿವರು ಹಾಗು ದಿವ್ಯಾಂಗ ಇಲಾಖೆಯ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಇವರ ಉಪಸ್ಥಿತಿಯಲ್ಲಿ ಈ ರಾಜ್ಯ ಪ್ರಶಸ್ತಿಯನ್ನು ಸೇವಾಭಾರತಿ ಕನ್ಯಾಡಿ. (ರಿ) ಸಂಸ್ಥೆಗೆ ನೀಡಿ ಇನ್ನೂ ಹೆಚ್ಚಿನ ಸಮಾಜಮುಖಿ ಸೇವಕಾರ್ಯಗಳನ್ನು ಮಾಡಲು ಪ್ರೇರೇಪಿಸಿದರು. ಈ ರಾಜ್ಯ ಪ್ರಶಸ್ತಿ ಲಭಿಸಲು ಕಾರಣೀಕರ್ತರಾದ ನಮ್ಮ ಸಂಸ್ಥೆಯ ದಾನಿಗಳು ಹಾಗೂ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು

  • 27 Nov 2022 1:00 PM | Seva Bharathi (Administrator)

    Donationby Padubidri Co operative Agricultural Society On the occasion of 69th Akila Bharathiya sahakara Sapthaha on behalf of Padubidri Co operative Agricultural Society Shri Lalaji Mendon(MLA of Kapu)handovered Cheque of Rs 50,000/- towards Sevadhama the rehabilitation centre for People with Spinal cord Injury. Thanks to President and all Directors of the Society.

  • 27 Nov 2022 12:57 PM | Seva Bharathi (Administrator)

    Felicitation to Mr K.Vinayaka Rao(President Sevabharathi ) by Lions Clubs International Dist 317D on the occasion of "Pranthiya Sammelana" On 27/11/2022 for the outstanding Services towards Disability Sector. Team Sevabharathi.

  • 16 Nov 2022 1:02 PM | Seva Bharathi (Administrator)

    ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರ ಸುಳ್ಯ: ಸೇವಾಭಾರತಿ ಬೆಳ್ತಂಗಡಿ ತಾಲೂಕು ಇದರ ಸೇವಾಧಾಮದ ಸಹಯೋಗದಲ್ಲಿ ರೋಟರಿ ಕ್ಲಬ್ ಸುಳ್ಯ, ಕರ್ನಾಟಕ ಪ್ಲೈ ವುಡ್ ಸುಳ್ಯ, ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ, ಎ. ಪಿ. ಡಿ ಬೆಂಗಳೂರು, ಇವುಗಳ ಜಂಟಿ ಆಶ್ರಯದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನವಂಬರ್ 16 ಬುಧವಾರ ಮತ್ತು 17 ಗುರುವಾರದಂದು ಎರಡು ದಿನಗಳ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರವು , ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯದಲ್ಲಿ ನಡೆಯಿತು. ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ ಇದರ ಡೀನ್ ಇಂಚಾರ್ಜ್ ಆದ ಡಾ.

    ಸತ್ಯವತಿ ಆಳ್ವರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸೇವಾಭಾರತಿಯ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಶ್ರೀ.ಕೆ ವಿನಾಯಕ ರಾವ್ ಇವರು ಸೇವಾಭಾರತಿ ಸೇವಾಧಾಮದ ಕಾರ್ಯಚಟುವಟಿಕೆಗಳ ಬಗ್ಗೆ ಸಾವಿಸ್ತಾರವಾದ ಪ್ರಾಸ್ತಾವಿಕ ನುಡಿಗಳನ್ನಾಡಿದರು., ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ ಇಲ್ಲಿನ ಹೆಚ್. ಓ. ಡಿ ಮತ್ತು ಮೂಳೆ ತಜ್ಞರಾದ ಡಾ. ರಂಗನಾಥ್ ಎನ್ ಇವರು ಬೆನ್ನುಹುರಿ ಅಪಘಾತದ ನಿರ್ವಹಣೆ ಮತ್ತು ದ್ವಿತೀಯಾಂತರ ಸಮಸ್ಯೆಗಳ ಬಗ್ಗೆ ಬಿರಾರ್ಥಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ನುಡಿದರು., ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯಇದರ ಡೈನಕಾಲೋಜಿಸ್ಟ್ ವಿಭಾಗ ಸೀನಿಯರ್ ಪ್ರೊಫೆಸರ್ ಮತ್ತು ಹೆಚ್. ಓ. ಡಿಯಾದ ಡಾ. ಗೀತಾ ಡೊಪ್ಪ ರವರು ಸುಳ್ಯ ತಾಲೂಕಿನ ಎಲ್ಲಾ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಇಂತಹ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ತಪಾಸಣೆ ಸಮಸ್ಯೆಗಳಿಗೆ ಪರಿಹಾರ ವೈದ್ಯಕೀಯ ಸಲಹೆ ಪಡೆಯ ಬೇಕು ಎಲ್ಲರೂ ಅರೋಗ್ಯವಂತರಾಗಬೇಕು ಎಂದು ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ರೋಟರಿ ಕ್ಲಬ್, ಸುಳ್ಯದ ಪ್ರೆಸಿಡೆಂಟ್ ಎಲೆಕ್ಟ್ ಆದ ಆನಂದ ಖಂಡಿಗ ರವರು ಒತ್ತಡ ಗಾಯಕ್ಕೆ ಒಳಗಾದ ಬೆನ್ನುಹುರಿ ಅಪಘಾತಕ್ಕೆ ಒಳಗಾದ ಶಿಬಿರಾರ್ಥಿಗಳಿಗೆ ಮೆಡಿಕಲ್ ಕಿಟ್ ಹಸ್ತಾಂತರಿಸಿ ಸೇವಾಭಾರತಿ ಸೇವಾಧಾಮವು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರಂತರವಾಗಿ ನೀಡುವ ಸಹಾಯ ಹಸ್ತ ಮತ್ತು ಸೌಲಭ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿ ಮುಂದೆಯೂ ರೋಟರಿ ಕ್ಲಬ್ ಸುಳ್ಯ ವತಿಯಿಂದ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

    ಶಿಬಿರದಲ್ಲಿ ಅನೇಕ ಸಂಘ ಸಂಸ್ಥೆಗಳ ಗಣ್ಯರು, ಆಸ್ಪತ್ರೆಯ ಸಿಬ್ಬಂದಿಗಳು, ಶಿಬಿರಾರ್ಥಿಗಳು ಮತ್ತು ಅವರ ಪೋಷಕರು ಹಾಗೂ ಸೇವಾಭಾರತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೇವಾಭಾರತಿಯ ಸಿಬ್ಬಂದಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕ್ಷೇತ್ರ ಸಂಯೋಜಕರಾದ ಅಖಿಲೇಶ್. ಎ ಇವರು ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಸೇವಾಧಾಮದ ಪೀರ್ ಟ್ರೈನರ್ ಆದ ಮೋಹನ್. ಕೆ ಅರಿಯಡ್ಕ ಇವರು ಧನ್ಯವಾದ ವಿತ್ತರು.

  • 19 Oct 2022 12:46 PM | Seva Bharathi (Administrator)

    ಸೇವಾಭಾರತಿ- ಸೇವಾಧಾಮ, ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಹೈಟೆಕ್ ಮೆಡಿಕೇರ್ ಆಸ್ಪತ್ರೆ, ಅಂಬಲಪಾಡಿ, ಉಡುಪಿ, ರೋಟರಿ ಕ್ಲಬ್ ಕಾಪು, ಅಮ್ಮ ರಿಲಿಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಕಾಪು ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವುಗಳ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 16ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು 6 ಗಾಲಿಕುರ್ಚಿಗಳ ವಿತರಣೆ ಕಾರ್ಯಕ್ರಮವು 19 ಮತ್ತು 20 ಅಕ್ಟೋಬರ್ 2022 ಪೂರ್ವಾಹ್ನ 9:30 ರಿಂದ ಹೈಟೆಕ್ ಮೆಡಿಕಲ್ ಆಸ್ಪತ್ರೆ, ಅಂಬಲಪಾಡಿ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಜೋನ್ 5 ರೋಟರಿ ಕ್ಲಬ್ ಸಹಾಯಕ ಗವರ್ನರ್ ಆಗಿರುವ ರೊ! ಡಾ. ಶಶಿಕಾಂತ ಕಾರಿಂಕ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಭಾರತೀಯ ಅಧ್ಯಕ್ಷರಾಗಿರುವ ಕೆ .

    ವಿನಾಯಕ ರಾವ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಮ್ಮ ಚಾರಿಟೇಬಲ್ ಟ್ರಸ್ಟ್ (ರಿ) ಕಾಪು ಇದರ ಅಧ್ಯಕ್ಷರಾದ ಶ್ರೀ ಕೆ . ವಾಸುದೇವ ಶೆಟ್ಟಿ, ಕೊಡವೂರು ನಗರಸಭಾ ಸದಸ್ಯರು ಮತ್ತು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರಾಗಿರುವ ಶ್ರೀ ಕೆ. ವಿಜಯ ಕೊಡವೂರು , ಹೈಟೆಕ್ ಮೆಡಿಕೆರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀಮತಿ ವಾಣಿ.ವಿ.ರಾವ್ ಹಾಗೂ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಟಿ.ಎಸ್ ರಾವ್ ಕಾಪು ರೋಟರಿ ಕ್ಲಬ್ ನ ಅಧ್ಯಕ್ಷರಾಗಿರುವ ರೊl ಕೆ. ಸದಾಶಿವ ಭಟ್, ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ಸೀನಿಯರ್ ಆರ್ಥೋಪೆಡಿಕ್ ಸರ್ಜನ್ ಡಾ. ಉಮೇಶ್ ಪ್ರಭು, ಹಿಪ್ ಅಂಡ್ ಸ್ಪೈನಲ್ ಸೀನಿಯರ್ ಕನ್ಸಲ್ಟೆಂಟ್ ಎಸ್. ಪಿ. ಮೋಹಂತಿ, ಮಂಗಳೂರಿನ ಜ್ಯೋತಿ ಕೆ.ಎಂ.ಸಿ ಹಾಸ್ಪಿಟಲ್ ನ ಕನ್ಸಲ್ಟೆಂಟ್ ಸ್ಟೈನ್ ಸರ್ಜನ್ ಈಶ್ವರ ಕೀರ್ತಿ, ಹಿರಿಯಡ್ಕ ಉದ್ಯಮಿಗಳಾದ ಶ್ರೀ ಕೃಷ್ಣಪ್ರಸಾದ್ ಶೆಟ್ಟಿ, ಉಡುಪಿ ದೇವಾಡಿಗ ಸಂಘದ ಅಧ್ಯಕ್ಷರಾಗಿರುವ ಶ್ರೀ ಗಣೇಶ್ ದೇವಾಡಿಗ, ಮಣಿಪಾಲ್ ಕೆ. ಎಂ. ಸಿ ಆಸ್ಪತ್ರೆಯ ಡಾ. ಮೈತ್ರೆಯಿ ಉಪಸ್ಥಿತರಿದ್ದರು. ಮಂಜುಳಾ ವಿ. ಪ್ರಸಾದ್ ಹಾಗೂ ಯೋಗ ತರಬೇತಿದಾರರಾದ ರಮೇಶ್ ಸಾಲಿಯಾನ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಶಿಬಿರದಲ್ಲಿ ಭಾಗವಹಿಸಿದ ಫಲಾನುಭವಿಗಳಿಗೆ ಯೋಗ, ಫಿಜಿಯೋಥೆರಪಿ, ರಕ್ತ ಪರೀಕ್ಷೆ,ಮೂತ್ರ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಆಪ್ತ ಸಮಾಲೋಚನೆ, ನುರಿತ ತಜ್ಞರಿಂದ ಕನ್ಸಲ್ಟೇಶನ್ ಸೇವೆಗಳನ್ನು ಉಚಿತವಾಗಿ ಒದಗಿಸಲಾಯಿತು. 20, ಅಕ್ಟೋಬರ್, 2022 ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರು ಮತ್ತು ಕೊಡು ಊರಿನ ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರಾಗಿರುವ ಶ್ರೀ ಕೆ. ವಿಜಯ ಕೊಡವೂರು ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸಲಹಾ ಮಂಡಳಿಯ ಸದಸ್ಯರಾಗಿರುವ ಶ್ರೀ ಸಿ ಎ. ಗುಜ್ಜಾಡಿ ಪ್ರಭಾಕರ್ ನರಸಿಂಹ ನಾಯಕ್, ಕಾರ್ಯದರ್ಶಿ ಶ್ರೀಮತಿ ಸ್ವರ್ಣ ಗೌರಿ, ಪಡುಬಿದ್ರಿ ಸಹಕಾರಿ ವ್ಯವಸಾಯಕ ಸೊಸೈಟಿಯ ಅಧ್ಯಕ್ಷರಾಗಿರುವ ಶ್ರೀ ಸುಧೀರ್ ಕುಮಾರ್, ಸೆಲ್ಕೋ ಸೋಲಾರ್ ಲೈಟ್ ಲಿಮಿಟೆಡ್ ನ ಡಿ.ಜಿ.ಎಂ ಶ್ರೀ ಗುರುಪ್ರಕಾಶ್ ಶೆಟ್ಟಿ, ಹೆಜಮಾಡಿ ಪಂಚಾಯತ್ ಸದಸ್ಯರಾಗಿರುವ ಶ್ರೀ ಪ್ರಾಣೇಶ್, ಸೇವಾ ಭಾರತಿಯ ಸಲಹಾ ಮಂಡಳಿಯ ಸದಸ್ಯರಾಗಿರುವ ಶ್ರೀ ವಿಷ್ಣುಪ್ರಸಾದ್ ತೆಂಕಿಲ್ಲಾಯ ಪಿ.ಡಬ್ಲ್ಯೂ.ಡಿ ಕಾಂಟ್ರಾಕ್ಟರ್ ಅಜಿತ್ ಕೊಡವೂರು, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗ ಹಾಗೂ ದಿವ್ಯಾಂಗ ರಕ್ಷಣಾ ಸಮಿತಿಯ ಖಜಾಂಜಿ ಆಗಿರುವ ಜಯ ಪೂಜಾರಿ ಕಲ್ಮಾಡಿ, ಉಡುಪಿ ಸೇವಾಧಾಮದ ಸದಸ್ಯರಾಗಿರುವ ಸಂತೋಷ್ ಸುವರ್ಣ, ರಿಸರ್ಚ್ ಸ್ಕಾಲರ್ ಆಶಾಲತಾ, ಕಾಪು ರೋಟರಿ ಕ್ಲಬ್ ನ ಕಾರ್ಯದರ್ಶಿ ಆಗಿರುವ ವಿದ್ಯಾಧರ ಪುರಾಣಿಕ್ ಇವರು ಸೇವಾಭಾರತಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.ಶಿಬಿರದಿಂದ ಒಟ್ಟು 11 ಜನ ಬೆನ್ನುಹುರಿ ಅಪಘಾತಕ್ಕೊಳಗಾದವರು ಫಲಾನುಭವ ಪಡೆದುಕೊಂಡರು.


  • 10 Oct 2022 12:44 PM | Seva Bharathi (Administrator)

    ಸೇವಾಧಾಮಪುನಶ್ಚೇತನ ಕೇಂದ್ರಕ್ಕೆ ಶಿರಡಿ ಸಾಯಿಬಾಬಾ ಭಿಕ್ಷಾ ಕೇಂದ್ರ ಮಂಗಳೂರು ಮತ್ತು ಮೂಡಬಿದ್ರೆಯ 8 ಜನರ ತಂಡ ಆಗಮಿಸಿ, ಸೇವಾಧಾಮದ ಸನಿವಾಸಿಗಳೊಂದಿಗೆ ಸಮಾಲೋಚಿಸಿ ಸೆಲ್ಫ್ ಕೇರ್ ಕಿಟ್ ಗಳನ್ನು ನೀಡಿರುತ್ತಾರೆ. ಸೇವಾಧಾಮದ ಕಾರ್ಯ ಚಟುವಟಿಕೆಗಳಿಗಾಗಿ ರೂ.5000 ವನ್ನು ದೇಣಿಗೆಯಾಗಿ ನೀಡಿರುತ್ತಾರೆ. ಸೇವಾಭಾರತಿಯ ಕಾರ್ಯದರ್ಶಿಯಾದ ಶ್ರೀಮತಿ ಸ್ವರ್ಣ ಗೌರಿ ಹಾಗೂ ಟ್ರಸ್ಟಿಗಳಾದ ಶ್ರೀಯುತ ಬಾಲಕೃಷ್ಣ ಇವರು ಉಪಸ್ಥಿತರಿದ್ದರು.

  • 9 Oct 2022 12:38 PM | Seva Bharathi (Administrator)

    ಸೇವಾಭಾರತಿ ಕನ್ಯಾಡಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ರೋಟರಿ ಕ್ಲಬ್ ಬೆಳ್ತಂಗಡಿ ಬ್ಲಡ್ ಬ್ಯಾಂಕ್, ಜಿಲ್ಲಾ ಸರಕಾರಿ ವೆನ್ಲಕ್ ಆಸ್ಪತ್ರೆ, ಮಂಗಳೂರು ಇವುಗಳ ಸಹಯೋಗದೊಂದಿಗೆ ಅಕ್ಟೋಬರ್ 9 ರಂದು ಶರತ್ ಕೃಷ್ಣ ಪಡ್ವೆಟ್ನಾಯ ಇವರು ಉಜಿರೆ ಶಾರದಾ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ, ಮಾತನಾಡಿದರು. ವೈದ್ಯಕೀಯ ಸಲಹೆಗಾರ ಶ್ರೀಧರ್ ಕೆ. ವಿ ಶುಭ ಹಾರೈಸಿದರು. ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ಇದರ ಅಧ್ಯಕ್ಷ ಧರ್ಣಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ಯಾಡಿ ಸೇವಾಭಾರತಿ ಅಧ್ಯಕ್ಷ ವಿನಾಯಕ ರಾವ್ ವೆನ್ ಲಾಕ್ ರಕ್ತ ನಿಧಿ ವಿಭಾಗದ ತಾಂತ್ರಿಕ ಮೇಲಸ್ತುವಾರಿ ಅಶೋಕ್, ಡಾ. ಸವಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಗೌರವಾಧ್ಯಕ್ಷ ಪ್ರಕಾಶ್ ಗೌಡ, ಪ್ರಗತಿ ಮಹಿಳಾ ಮಂಡಲ ಕಾರ್ಯದರ್ಶಿ ಗಾಯತ್ರಿ ಶ್ರೀಧರ್ ಸಹಿತ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಒಕ್ಕಲಿಗರ ಸೇವಾ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಜಿ .ಕೆ ನಿರೂಪಿಸಿ ರಮೇಶ್ ಪೇಲಾರ್ ವಂದಿಸಿದರು. ಒಟ್ಟು102 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

  • 2 Oct 2022 12:55 PM | Seva Bharathi (Administrator)

    Our yearly Donor and well-wisher Sri. Ganesh P Aithal, Kokkada donated Rs. 25,000/- towards Sevadhama Rehabilitation centre for People with Spinal Cord Injury. We thank him on behalf of Sevabharathi and all the beneficiary.

  • 2 Oct 2022 12:52 PM | Seva Bharathi (Administrator)

    ನೈಮಿಷ ಹೌಸ್ ಆಫ್ ಸ್ಪೈಸಸ್ ಸೌತಡ್ಕ, ಕೊಕ್ಕಡ ಗ್ರಾಮ, ಬೆಳ್ತಂಗಡಿ ತಾಲೂಕು ಇವರು ತಮ್ಮ ಉದ್ಯಮದ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಸೇವಾಭಾರತಿ ಸಂಸ್ಥೆಯ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ನಡೆಸಲ್ಪಡುವ ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ರೂ.50,000 ದ ಚೆಕ್ಕನ್ನು ಮಾಲೀಕರಾದ ಶ್ರೀ ಬಾಲಕೃಷ್ಣರವರು ಶ್ರೀ ಕೆ.

    ವಿನಾಯಕ ರಾವ್ ( ಅಧ್ಯಕ್ಷರು, ಸೇವಾಭಾರತಿ ) ಮತ್ತು ತಂಡಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಗೌಡ ಪೂವಾಜೆ, ಶ್ರೀ ಬಾಲಕೃಷ್ಣ ನೈಮಿಶ ಇವರ ಮನೆಯವರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಸಮಾಜದಿಂದ ಪಡೆದುಕೊಂಡ ಆದಾಯದ ಭಾಗಶಃವನ್ನು ಪುನಃ ಸಾಮಾಜಿಕ ಕಾರ್ಯಗಳಿಗೆ ಕೊಡುವ ಕಾರ್ಯ ನಿಜಕ್ಕೂ ಪ್ರೇರಣೆ ಆಗಿದೆ.

  • 2 Oct 2022 12:36 PM | Seva Bharathi (Administrator)

    ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಇಂಡಿಯಾ ಕೇರ್ಸ್ ಆಯೋಜಿಸಿದ ಫನ್ ರೇಸಿಂಗ್ ಲೈಫ್ ಮ್ಯೂಸಿಕ್ ಶೋ ಸಂಜೆ 6 ಗಂಟೆಗೆ ಪ್ರಾರಂಭಗೊಂಡು ರಾತ್ರಿ11 ಗಂಟೆಯವರೆಗೆ ಮುಂದುವರೆದಿದ್ದ ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸಿಬ್ಬಂದಿಗಳಾದ ಚರಣ್ ಎಂ, ಮೋಹನ್ ಎಸ್, ಮನು ಆರ್, ಆಶ್ರೀತ್ ಸಿ.ಪಿ , ಅಖಿಲೇಶ್ ಎಸ್ ಹಾಗೂ ಸೇವಾಭಾರತಿಯ ದಾನಿಸಂಸ್ಥೆಗಳಾದ ಕೆಮ್ ಟ್ರೆಂಡಿನ ಕಾರ್ಯಪ್ಪ, ಏರಿಯಾ ಮ್ಯಾನೇಜರ್ ಸೌತ್, ಪುಟ್ಟಸ್ವಾಮಿ ಪ್ರೊಫೆಸರ್ ಬಿ .ಎಂ .ಎಸ್. ಕಾಲೇಜು ಬೆಂಗಳೂರು ಮಹನೀಯ ದಾನಿಗಳಾದ ಶ್ರೀಮತಿ ಗಾಯತ್ರಿ ಡಾ. ಅರ್ಚನಾ ಸೇವಾನಿಧಿ ಧಾನಿಗಳಾದ ಛಾಯಾ ಇವರು ಭಾಗವಹಿಸಿದ್ದರು.

<< First  < Prev   1   2   3   4   5   Next >  Last >> 


Accreditation:    


Copyright© 2021-22. Seva Bharathi Kanyady. All Rights Reserved.

Powered by Wild Apricot Membership Software